ದುರ್ಗದಿ ಕೋಟೆಯು ಭಾರತದ ಮಹಾರಾಷ್ಟ್ರ ರಾಜ್ಯದ, ಮುಂಬೈ ಸಮೀಪದ ಕಲ್ಯಾಣ್‌ನಲ್ಲಿರುವ ಒಂದು ಕೋಟೆಯಾಗಿದೆ. ದುರ್ಗದಿ ಕೋಟೆಯನ್ನು ನೂರಾರು ವರ್ಷಗಳ ಹಿಂದೆ ಹಿಂದೂ ಕ್ಷತ್ರಿಯರಾದ ಮರಾಠ ಶಿರ್ಕೇಶಾತವಾಹನರು ನಿರ್ಮಿಸಿದರು. ಕೋಟೆಯ ಮೇಲೆ ಹಿಂದೂ ಸಮುದಾಯದ ದುರ್ಗಾದೇವಿ (ದುರ್ಗಾ ಮಾತಾ)ಯ ದೇವಾಲಯವಿದೆ. == ಇತಿಹಾಸ == ದುರ್ಗದಿ ಕೋಟೆಯನ್ನು ನೂರಾರು ವರ್ಷಗಳ ಹಿಂದೆ ಹಿಂದೂ ಕ್ಷತ್ರಿಯ ಮರಾಠ ರಾಜರಾದ ಶಿರ್ಕೆಶಾತವಾಹನ ರಾಜರು ನಿರ್ಮಿಸಿದರು. ದುರ್ಗದಿ ಕೋಟೆ ಪ್ರದೇಶದಲ್ಲಿ ದುರ್ಗಾ ಮಾತೆಯ ದೇವಸ್ಥಾನ, ಶಿರ್ಕೇಶಾತವಾಹನನ ಸ್ಮಾರಕವಿದೆ. ದುರ್ಗದಿ ಕೋಟೆ ಮತ್ತು ಕಲ್ಯಾಣ ಬಂದರು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಶಿರ್ಕೇಶಾತವಾಹನ ರಾಜರ ವಂಶಸ್ಥರು ಮತ್ತು ಉತ್ತರಾಧಿಕಾರಿಗಳ ಒಡೆತನದಲ್ಲಿದೆ. ಇಡೀ ದುರ್ಗದಿ ಕೋಟೆ ಮತ್ತು ಕಲ್ಯಾಣ್ ಬಂದರು ಹಿಂದೂ ಧರ್ಮದ ಯಾತ್ರಾ ಸ್ಥಳ ಮತ್ತು ಶಕ್ತಿ ಪೀಠವಾಗಿದೆ. ಶಿವಭಗವಾನ್ ಶಾತವಾಹನ ಸಾಮ್ರಾಜ್ಯ ಸ್ಮಾರಕವು ಸಂರಕ್ಷಿತ ಸ್ಮಾರಕವಾಗಿದೆ. ಮಹಾರಾಷ್ಟ್ರ ರಾಜ್ಯ ಮತ್ತು ಇಡೀ ಭಾರತದ (ಹಿಂದೂಸ್ತಾನ) ವ್ಯಾಪಾರವನ್ನು ಈ ಪ್ರದೇಶದಿಂದ ನಡೆಸಲಾಗುತ್ತಿತ್ತು, ಮತ್ತು ಅದು ಇಂದಿಗೂ ನಡೆಯುತ್ತಿದೆ. ಈ ಕಲ್ಯಾಣ ಬಂದರು ಮತ್ತು ದುರ್ಗದಿ ಕೋಟೆ ಪ್ರದೇಶದಿಂದ, ಶಾತವಾಹನ ರಾಜರು ಅದರ ನೌಕಾಪಡೆ ಮತ್ತು ಸೈನ್ಯವನ್ನು ಸ್ಥಾಪಿಸಿದರು. ಇದು ಮಹಾರಾಷ್ಟ್ರ ರಾಜ್ಯದ ರಕ್ಷಣೆಗಾಗಿ ಶಾತವಾಹನ ಸಾಮ್ರಾಜ್ಯದ ವಿಶ್ವದ ಮೊದಲ ಪ್ರಮುಖ ವ್ಯವಸ್ಥೆಗಳಲ್ಲಿ ಒಂದಾಗಿದೆ. ಕೋಟೆಯ ಮೇಲಿರುವ ದುರ್ಗಾದೇವಿ ದೇವಸ್ಥಾನ ಶಿರ್ಕೇಶಾತವಾಹನರ ಕಾಲದಲ್ಲಿ ದುರ್ಗಾದೇವಿ ಇಲ್ಲಿ ಕಾಣಿಸಿಕೊಂಡಳು ಎಂದು ನಂಬಲಾಗಿದೆ. ಅಂದಿನಿಂದ ಇಲ್ಲಿ ದುರ್ಗಾದೇವಿಯ (ದುರ್ಗಾ ಮಾತೆಯ) ದೇವಸ್ಥಾನವಿದೆ. ಕೋಟೆಯ ಮೇಲಿರುವ ದುರ್ಗಾದೇವಿ ದೇವಸ್ಥಾನ ಶಿರ್ಕೇಶಾತವಾಹನರ ಕಾಲದಲ್ಲಿ ದುರ್ಗಾದೇವಿಯು ಇಲ್ಲಿ ಕಾಣಿಸಿಕೊಂಡಳು ಎಂದು ನಂಬಲಾಗಿದೆ. ಅಂದಿನಿಂದ ಇಲ್ಲಿ ದುರ್ಗಾದೇವಿಯ (ದುರ್ಗಾ ಮಾತೆಯ) ದೇವಾಲಯವನ್ನು ನಿಮಿ೯ಸಿದರು. ೨೦೧೮ ರಲ್ಲಿ ನವರಾತ್ರಿ ಉತ್ಸವದಲ್ಲಿ ಸುಮಾರು ೭ ಲಕ್ಷ ಜನ ಭೇಟಿ ನೀಡಿದ್ದರು. ಇಡೀ ದುರ್ಗದಿ ಕೋಟೆ ಮತ್ತು ಕಲ್ಯಾಣ್ ಬಂದರು ಪ್ರದೇಶವು ಮಲ್ಶೆಜ್ ನಾನೇಘಾಟ್ ಮತ್ತು ಇತರ ಅರಣ್ಯ ಪ್ರದೇಶ ಮತ್ತು ಪ್ರವಾಸೋದ್ಯಮ ಸಂಘದ ಒಡೆತನದಲ್ಲಿದೆ. == ಚಿತ್ರಗಳು == == ಉಲ್ಲೇಖಗಳು ==